ಅತ್ತೆ-ಸೊಸೆಯರಿಗೆ ಜಗಳವೇಕೆ? ಮಾಂಸಾಹಾರ,ಸಸ್ಯಾಹಾರ ಯಾವುದು? - ಶ್ರೀಮಧ್ವಾನುಜ ಶ್ರೀವಿಷ್ಣುತೀರ್ಥರು ಹೇಳಿದ ಮಾರ್ಮಿಕವಾದ ಕಥೆ

ಅತ್ತೆ-ಸೊಸೆಯರಿಗೆ ಜಗಳವೇಕೆ? ಮಾಂಸಾಹಾರ,ಸಸ್ಯಾಹಾರ ಯಾವುದು? - ಶ್ರೀಮಧ್ವಾನುಜ ಶ್ರೀವಿಷ್ಣುತೀರ್ಥರು ಹೇಳಿದ ಮಾರ್ಮಿಕವಾದ ಕಥೆ ಡಾ.ಶ್ರೀನಿಧಿ ಆಚಾರ್ಯ ಪ್ಯಾಟಿ ವಸು ಎಂಬ ರಾಜನೊಬ್ಬನಿಗೆ ಬ್ರಹ್ಮಹತ್ಯಾ ದೋಷವು ಬಂದೊದಗುತ್ತದೆ. ಆ ರಾಜನು ಬ್ರಹ್ಮಪಾರಸ್ತೋತ್ರವನ್ನು ಪಠಿಸುತ್ತಾ ತಪಸ್ಸನ್ನು ಆಚರಿಸುತ್ತಾನೆ. ಆ ಸ್ತೋತ್ರದ ಪ್ರಭಾವದಿಂದ ರಾಜನಲ್ಲಿರುವ ಬ್ರಹ್ಮಹತ್ಯಾ ದೋಷವು ವ್ಯಾಧ(ಬೇಡ) ಜನ್ಮವನ್ನು ಪಡೆಯುತ್ತದೆ. ಆ ಬ್ರಹ್ಮಹತ್ಯಾ ದೋಷದಿಂದ ಮುಕ್ತನಾದ ರಾಜನು ಮುಕ್ತಿಯನ್ನು ಪಡೆಯುತ್ತಾನೆ ಎನ್ನುವುದು ವರಾಹ ಪುರಾಣದಲ್ಲಿ ನಿರೂಪಿದವಾದ ರಾಜನ ವೃತ್ತಾಂತ. ಇದರ ಆಧಾರದಿಂದ ಆಚಾರ್ಯರು ಕರ್ಮಗಳಿಗೂ ಜೀವಸ್ವರೂಪವಿಗೆ ಎಂಬ ತತ್ವವನ್ನು ಅನುವ್ಯಾಖ್ಯಾನದ ತೃತೀಯಾಧ್ಯಾಯದಲ್ಲಿ ನಿರೂಪಿಸಿದ್ದಾರೆ. ಬ್ರಹ್ಮಹತ್ಯಾ ದೋಷವು ಬೇಡನ ಜನ್ಮವನ್ನು ಪಡೆದ ಮೇಲೆ ಎನು ಮಾಡಿದನು ಎಂಬ ಕುತೂಹಲವುಂಟಾಗುತ್ತದೆ. ಶ್ರೀಮಧ್ವಾನುಜ ಶ್ರೀವಿಷ್ಣುತೀರ್ಥರು.ತಮ್ಮ ಸಂನ್ಯಾಸಪದ್ಧತಿ ಎಂಬ ಗ್ಲಂಥದಲ್ಲಿ ವಿಷ್ಣುನೈವೇದ್ಯದ ಮಹತ್ವವನ್ನು ಸೂಚಿಸುವ ಪ್ರಕರಣದಲ್ಲಿ ವರಾಹ ಪುರಾಣದಲ್ಲಿರುವ ಬೇಡನ ರೋಚಕವಾದ ವೃತ್ತಾಂತವನ್ನು ಉಲ್ಲೇಖಿಸುತ್ತಾರೆ. ವ್ಯಾಧಶ್ವಶುರಸಂವಾದ ಎಂದು ಈ ಪ್ರಕರಣವು ತುಂಬಾ ಅಪರೂಪದ ವಿಷಯಗಳನ್ನೊಳಗೊಂಡಿದೆ. ವ್ಯಾಧತ್ವೇ ಚ ಸುಧರ್ಮಜ್ಞೋ ಬಭೂವ ಚ ತಥಾಕರೋತ್ ಸೋಽಮಾವಾಸ್ಯಾಂ ತಥಾ ಪುತ್ರ್ಯಾಃ ಶ್ವಶುರಸ್ಯ ಗೃಹಂ ಪ್ರತಿ | ಗತ...