Posts

Showing posts from November, 2020

ಮಾನಸಿಕ ಖಿನ್ನತೆಗೆ ವಿಜಯದಾಸರ ಪರಿಹಾರ-1

Image
  ಕನ್ನಡಸಾರಸ್ವತ ಲೋಕಕ್ಕೆ ಹರಿದಾಸರುಗಳ ಕೊಡುಗೆ ಅಪಾರ. ಅದರಲ್ಲೂ ಅಧ್ಯಾತ್ಮಪ್ರಪಂಚಕ್ಕೆ ಹರಿದಾಸರುಗಳ ಪದ್ಯಗಳು ರಸದೌತಣ. ಮಧ್ವಾಚಾರ್ಯರು ಸ್ವತಃ ಸಂಗೀತಕೋವಿದರು ,ಅವರ ದ್ವಾದಶಸ್ತೋತ್ರಗಳಲ್ಲಿ ಇರುವ  ಸಂಗೀತದ ಸುವಾಸನೆಯನ್ನು ಜಗತ್ತಿಗೆಲ್ಲಾ ಪಸರಿಸಿದ ಕೀರ್ತಿ ಹರಿದಾಸರದ್ದು. ಶ್ರೀಪಾದರಾಜರು,ವ್ಯಾಸರಾಜರು ಹಾಕಿಕೊಟ್ಟದಾರಿಯಲ್ಲಿ ಮುಂದುವರೆದು ತತ್ವಗಳನ್ನು ಕನ್ನಡಭಾಷೆಯಲ್ಲಿ ತಿಳಿಸಿ ಹರಿದಾಸರುಗಳು ಮಾಡಿದ ಉಪಕಾರವು ಅವಿಸ್ಮರಣೀಯ. ಇಂತಹ ಹರಿದಾಸರಪರಂಪರೆಯಲ್ಲಿ ಪುರಂದರದಾಸರ ಶಿಷ್ಯರಾಗಿ 25,000ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ದಾಸಶ್ರೇಷ್ಠರೆನಿಸಿಕೊಂಡ ಮಹಾನುಭಾವರು ವಿಜಯದಾಸರು.  ವಿಜಯದಾಸರ ಕೃತಿಗಳು ಅವರ ಅನುಭವದ ಮೂಸೆಯಲ್ಲಿ ಬಂದ ರಸಪಾಕಗಳು. ಅವುಗಳು ಕೇವಲ ಅಧ್ಯಯನಕ್ಕೆ ಮಾತ್ರ ನಿಲುಕುವಂತದ್ದಲ್ಲ. ಭಗವದ್ಭಕ್ತಿ, ವೈರಾಗ್ಯ ,ಮತ್ತು ಅನುಭವಗಳಿಂದ ನಮ್ಮ ಪಾತ್ರತೆ ಎಷ್ಟು ಹೆಚ್ಚುತ್ತದೋ ,ಅಷ್ಟು ನಮಗೆ ಹೆಚ್ಚೆಚ್ಚು ಅರ್ಥವಾಗುತ್ತಾ ಹೋಗುತ್ತವೆ. “ನಿನ್ನಾಧೀನ ದೇಹ ಪ್ರಾಣೇಂದ್ರಿಯ ಕರ್ಮಾಚರಣೆ “ ಎನ್ನುವ ಸುಳಾದಿಯು ಇದಕ್ಕೆ ಸ್ಪಷ್ಟ ನಿದರ್ಶನ. ಪ್ರತಿಯೊಂದು ಪದಾರ್ಥವು ಪರಮಾತ್ಮನ ಅಧೀನವೆನ್ನುವುದು ಸಿದ್ಧಾಂತ. ಅದರ ವಿವರಣೆಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ.  “ನ ಋತೇ ತ್ವತ್ಕ್ರಿಯತೆ” ಎನ್ನುವ ವೇದಮಂತ್ರದ , ‘ದ್ರವ್ಯಂ ಕರ್ಮ ಚ ಕಾಲಶ್ಚ ಸ್ವಭಾವೋ ಜೀವ ಏವ ಚ | ಯದನುಗ್ರಹತಃ ಸಂತಿ ನ ಸಂತಿ ಯದುಪೇಕ್ಷಯಾ ‘ ಎಂಬ ಅನುವ್ಯಾ

ಮಾನಸಿಕ ಖಿನ್ನತೆಗೆ ವಿಜಯದಾಸರ ಪರಿಹಾರ -2

Image
   ಮಾನಸಿಕ ಖಿನ್ನತೆಗೆ ವಿಜಯದಾಸರ ಪರಿಹಾರ -2   ಪರಮಾತ್ಮನ ಅಧೀನರಾದಮೇಲೆ ನಮ್ಮ ಜೀವನದ ಭಾರವನ್ನೆಲ್ಲಾ ಪರಮಾತ್ಮನೇ ಹೊರುತ್ತಾನೆ ಎಂಬ ನಂಬಿಕೆಯನ್ನು ಹೊಂದಿರಬೇಕು ಎಂದು ದಾಸರು ``ನಿನ್ನಾಧೀನನಾದವನೋ ನಿತ್ಯದಲಿ ನಾನು, ಮನ್ನಿಸು ದಯದಿಂದ ಮಾತು ಕೇಳಿ , ಇನ್ನಾವ ಯೋಚನೆಯೋ ನಿರ್ಧಾರವಾಗಿ ನುಡಿದೆ  ಎನ್ನಭಾರವು ನಿನ್ನದಲ್ಲವೇನಯ್ಯಾ” ಎಂದು ತಮ್ಮ ಸುಳಾದಿಯಲ್ಲಿ ನಿರೂಪಿಸುತ್ತಾರೆ. ಈ ಜನ್ಮದಲ್ಲಿ ನಮ್ಮ ತಂದೆಯೋ,ತಾಯಿಯೋ ಇನ್ನಾರೋ ರಕ್ಷಕರೆಂದು ತಿಳಿದಿರುತ್ತೇವೆ. ಅನಂತಜನ್ಮಗಳಿಂದ ನಮ್ಮನ್ನು ರಕ್ಷಿಸುತ್ತಾ ಬಂದವನು ಆ ಪರಮಾತ್ಮ . ಜಲೂಕ ಎಂಬ ಜಲಚರ ಪ್ರಾಣಿಗೆ ಕೈ , ಕಾಲುಗಳಿಲ್ಲ , ಆದರೆ ನದಿಯಲ್ಲಿ ಅದರ ಆಹಾರವು ಹರಿದುಬರುವಂತೆ ಮಾಡಿ ಅದನ್ನು ರಕ್ಷಿಸುತ್ತಾನೆ. “ರಕ್ಷತೀತ್ಯೇವ ವಿಶ್ವಾಸಃ” ಎಂದು ಹೇಳಿದ ಹಾಗೆ "ರಕ್ಷಿಸುತ್ತಾನೆ" ಎನ್ನುವ ಧೃಢವಾದ ವಿಶ್ವಾಸವಿದ್ದರೆ,  ಪರಮಾತ್ಮನೂ ಕೂಡ ``ಯೋಗಕ್ಷೇಮಂ ವಹಾಮ್ಯಹಂ” ಎಂದು ಆಶ್ವಾಸನೆ ಕೊಟ್ಟ ಹಾಗೆ ನಮ್ಮನ್ನು ರಕ್ಷಿಸುತ್ತಾನೆ ಎಂಬುವುದರಲ್ಲಿ ಸಂದೇಹವಿಲ್ಲ. ದಾಸರು ತಮ್ಮ ಹಂತದ ಭಕ್ತಿಯ ಪ್ರಕಾರವನ್ನು ನಿರೂಪಿಸುತ್ತಾರೆ. ಯಾವುದೇ ಸುಖ ಸುಪ್ಪತ್ತಿಗೆಗಳು ತನ್ನ ಸಾಧನೆಗೆ ಅಡ್ಡವಾಗುವುದಂತಾದ್ದರೇ, ಅದನ್ನು ಎಂದೆಂದೂ ಕರುಣಿಸಬೇಡ, ಕಷ್ಟ ಬಂದರೂ ಅದನ್ನು ನಿನ್ನ ಅನುಗ್ರಹವೆಂದು ಅನುಭವಿಸುವ ಧೈರ್ಯ ನನಗೆ ಕರುಣಿಸಿರುವಿ, ಹಾಗಾಗಿ ನಾನು ದುಃಖ ಪಡುವುದಿಲ್ಲ, ಎಷ್ಟೇ ಕಷ್ಟ ಬಂದರೂ,ಸುಖ ಬಂದರೂ