Posts

Showing posts from February, 2020

ಮಧ್ವಾಚಾರ್ಯರು ಮತ್ತು Leadership Quality

Image
       ಅಮಂತ್ರಂ ಅಕ್ಷರಂ ನಾಸ್ತಿ          ನಾಸ್ತಿ ಮೂಲಂ ಅನೌಷಧಂ|       ಅಯೋಗ್ಯಃ ಪುರುಷೋ ನಾಸ್ತಿ          ಯೋಜಕಃ ತತ್ರ ದುರ್ಲಭಃ|| ಸುಭಾಷಿತಕಾರ ಹೀಗೆ ಹೇಳುತ್ತಾನೆ.ಮಂತ್ರವಲ್ಲದ ಅಕ್ಷರವಿಲ್ಲ, ಔಷಧೀಯ ಗುಣವಿಲ್ಲದ ಗಿಡಮೂಲಿಕೆಗಳಿಲ್ಲ, ಅಯೋಗ್ಯನಾದ ಮನುಷ್ಯನಿಲ್ಲ. ಇರುವುದೊಂದೇ, ಅದು ಯೋಜಕರ ಕೊರತೆ. ಭಾರತೀಯ ಸಮಾಜ ಅನುಭವಿಸುತ್ತಿರುವ ಕೊರತೆ ಇದು. ಯೋಜಕರಾದ ನಾಯಕರುಗಳು ತೀರ ವಿರಳ. ಆಚಾರ್ಯರನ್ನು ತ್ರಿವಿಕ್ರಮಪಂಡಿತಾಚರ್ಯರು “ ಆಧ್ಯಾತ್ಮಜ್ಞಾನನೇತಾ ” ಎಂದು ಕರೆದಿದ್ದಾರೆ.ಆಧ್ಯಾತ್ಮಜ್ಞಾನದತ್ತ ನಮ್ಮನ್ನು ಕೊಂಡೊಯ್ಯುವ “ನಾಯಕ” ಆಚಾರ್ಯರು. ಸಾಮಾಜಿಕವಾಗಿ ನಾಯಕತ್ವಗುಣವನ್ನು ಲೋಕಕ್ಕೆ ತೋರಿಸುತ್ತಾ ಅನೇಕರನ್ನು ಪ್ರಭಾವಿಸಿದವರು.  ಅವರು ವ್ಯಕ್ತಿಯು ನಾಯಕನಾಗಬೇಕಾದರೇ ಅಳವಡಿಸಿಕೊಳ್ಳಬೇಕಾದ ಗುಣಗಳ (Leadership qualities)ಬಗ್ಗೆ ಚೆಲ್ಲಿದ ಬೆಳಕನ್ನು ಕಾಣಲು ಪ್ರಯತ್ನಿಸೋಣ. ಮುಂದಾಳುತ್ವ ಗುಣ (leading from front) ನಾಯಕನಾದವನು ತಾನು ಮುಂದೆ ನಿಂತು ,ಸೋಲು ಗೆಲುವುಗಳ ಜವಾಬ್ದಾರಿಯನ್ನು ಹೊತ್ತು,ತನ್ನ ಜೊತೆಯಿರುವವರನ್ನು ಮುನ್ನಡೆಸಬೇಕು. ಯಶಸ್ಸನ್ನು ಪಡೆದಾಗ ಅದರ ಶ್ರೇಯಸ್ಸನ್ನು ಪಡೆದು,ಯಶ ಕಾಣದಾಗ ಜವಾಬ್ದಾರಿಯಿಂದ ನುಣಿಚಿಕೊಂಡು,ಅಪಕೀರ್ತಿಯ ಜವಾಬ್ದಾರಿಯನ್ನು ತನ್ನವರ ಮೇಲೆ ಹಾಕುವುದು ನಿಜವಾದ ನಾಯಕನ ಲಕ್ಷಣವಲ್ಲ. ಆಚಾರ್ಯರು ತಾವು ಮುಂದೆ ನಿಂತು ನಾಯಕತ್ವವನ್ನು ವಹಿಸಿ ತೋರಿಸಿದ್ದಾರೆ

ಮಧ್ವಾಚಾರ್ಯರು ಮತ್ತು Time Management

ಜಗತ್ತಿನಲ್ಲಿ ಎಲ್ಲಾ ವ್ಯಕ್ತಿಗಳಿಗೂ ಇರುವುದು ೨೪ ಘಂಟೆಗಳೆ,ಆದರೆ ಅಷ್ಟೇ ಸಮಯವನ್ನು ಬಳಸಿಕೋಂಡು ಕೆಲವರು ಬಹಳ ಸಾಧಿಸುತ್ತಾರೆ. ಕೆಲವರು ಸಮಯ ಸಾಲುವುದಿಲ್ಲ ಎಂದು ಆಕ್ಷೇಪಿಸುತ್ತಾರೆ.ಇಲ್ಲಿ ಮುಖ್ಯವಾಗಿ ಎರಡು ಕಾರಣಗಳು, ಒಂದು ಉದಾಸೀನತೆ, ಇನ್ನೋಂದು ಸಮಯನಿರ್ವಹಣೇಯ ಕೋರತೆ.ಉದಾಸಿನತೆಗೆ ಮದ್ದಿಲ್ಲ,ಆದರೆ ಸಮಯವನ್ನು ಹೇಗೆ ನಿರ್ವಹಿಸಬೇಕೆಂಬ ಕಲೆಯನ್ನು ತಿಳಿದುಕೋಳ್ಳಬೇಕು. ಆಚಾರ್ಯರು ತಮ್ಮ ಅವತಾರಕಾಲದಲ್ಲಿ ಅಪರಿಮಿತ ಸಾಧನೆಗಳನ್ನು ಮಾಡುತ್ತಾ ಸಮಯನಿರ್ವಹಣೆಯ ಕಲೆಯನ್ನು ಶಿಷ್ಯರಿಗಾಗಿ ತೋರಿಸಿಕೋಟ್ಟಿದ್ದಾರೆ. ಮಧ್ವನವಮಿಯ ಸಂಧರ್ಭದಲ್ಲಿ  ಅದನ್ನು ಅರ್ಥೈಸಿಕೋಳ್ಳಲು ಪ್ರಯತ್ನಿಸೋಣ. ಸಮಯ ಹಂಚಿಕೆ [Time Management] ನಾವು ಅನೇಕ ಬಾರಿ ಪ್ರಮುಖವಲ್ಲದ ಕೆಲಸಗಳಿಗೆ ಹೆಚ್ಚಿನ ಸಮಯವನ್ನು ವ್ಯಯ ಮಾಡಿ, ಪ್ರಮುಖ ಕೆಲಸಗಳಿಗೆ ಸಮಯವಿಲ್ಲವೆಂದು ಒದ್ದಾಡುತ್ತೆವೆ. ಆಚಾರ್ಯರು ಬಾಲಕನಾಗಿದ್ದಾಗ ಅವರ ತಂದೆಯು ಅಕ್ಷರಾಭ್ಯಾಸ ಮಾಡಿಸಲು ಪ್ರ‍ಾರಂಭಿಸಿದರು.ತಂದೆಯು ಒಮ್ಮೆ ಬರೆದಿದ್ದನ್ನು ಮತ್ತೊಮ್ಮೆ ಬರೆಯಲು ಹೇಳಿದರು.ಆಚಾರ್ಯರು “ನೆನ್ನೆ ಬರೆದ ಅಕ್ಷರಗಳನ್ನೇ ಮತ್ತೆ ಮತ್ತೆ ಯಾಕೆ ಬರೆಯಬೇಕು,ಹೊಸದೇನಾದಿದ್ದರು ಹೇಳಿ” ಎಂದರು. ಮುಂದೋಮ್ಮೆ ಆಚಾರ್ಯರ ವೇದಗುರುಗಳು ವೇದಪಾಠವನ್ನು ಮಾಡುತ್ತಿದ್ದರು.ಆಚಾರ್ಯರು ಬೇರೆನನ್ನೋ ಯೋಚಿಸುತ್ತಿದ್ದರು.ಆಗ ಗುರುಗಳು “ಗೆಳೆಯರೋಂದಿಗೆ ವೇದವನ್ನು ಏಕೆ ಉಚ್ಚಾರಿಸುತ್ತಿಲ್ಲಾ” ಎಂದು ಆಕ್ಷೇಪಿಸಿದರು. ಅದಕ್ಕೆ ಆಚಾ