Posts

Showing posts from August, 2023

ಇಸ್ರೋ ಮತ್ತು ತಿರುಪತಿ ತಿಮ್ಮಪ್ಪ

Image
            ಇಸ್ರೋ ಮತ್ತು ತಿರುಪತಿ ತಿಮ್ಮಪ್ಪ ಭಾರತೀಯ ವಿಜ್ಞಾನಿಗಳು ಅತ್ತ ಚಂದ್ರಯಾನ-3 ಯೋಜನೆಯ ಅಂತಿಮ ಹಂತದ ಪರೀಕ್ಷೇಗಳನ್ನು ನಡೆಸುತ್ತಾ ಯೋಜನೆಯ ಸಫಲತೆಗಾಗಿ ಹಗಲಿರುಳು ಶ್ರಮಿಸುತ್ತಿದ್ದರು . ವಿಜ್ಞಾನಿಗಳ ಒಂದು ತಂಡ ಎಂದಿನಂತೆ ಯೋಜನೆಯ ಸಾಫಲ್ಯಕ್ಕಾಗಿ  ತಿಮ್ಮಪ್ಪನನ್ನು ಪ್ರಾರ್ಥಿಸಲು ತಿರುಮಲದಲ್ಲಿದ್ದರು. ಉಪಕರಣದ ಒಂದು ಭಾಗವನ್ನು ತಿಮ್ಮಪ್ಪನ ಮುಂದಿಟ್ಟು ಯೋಜನೆ ಯಶಸ್ಸಿಗಾಗಿ ಅನುಗ್ರಹವನ್ನು ಪ್ರಾರ್ಥಿಸಿದರು . ಇದು ಪತ್ರಿಕೆಯಲ್ಲಿ ಪ್ರಕಟವಾಗಿದ್ದೆ ತಡ , ಮಂಗಳಯಾನಕ್ಕೂ ಚಂದ್ರಯಾನಕ್ಕೂ ವ್ಯತ್ಯಾಸವೂ ತಿಳಿಯದ ಸ್ವಯಂಘೋಷಿತ ಜೀವಪರ,ಪ್ರಗತಿಪರ, ಸಮಾಜದ ಸಾಕ್ಷಿಪ್ರಜ್ಞೆಯ ಬುದ್ದಿಜೀವಿಗಳು ಇದೊಂದು ಪ್ರತಿಗಾಮಿ ಚಿಂತನೆಯೆಂದೂ, ಭಾರತೀಯ ವಿಜ್ಞಾನಿಗಳಿಗೆ ತಮ್ಮ ಕೆಲಸದ ಮೇಲೆಯೆ ವಿಶ್ವಾಸವಿಲ್ಲವೆಂದೂ, ಮೌಡ್ಯವೆಂದೂ ಬೊಬ್ಬಿಡುತ್ತಾ, ಪ್ರಧಾನಮಂತ್ರಿಗಳ ವೈಜ್ಞಾನಿಕ ಸಲಹೆಗಾರರು ಈ ರೀತಿಯ ಮೌಡ್ಯಾಚಾರಣೆಯನ್ನು ನಿಲ್ಲಿಸುವಂತೆ ಕ್ರಮವಹಿಸಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಪತ್ರವನ್ನು ಪ್ರಕಟಿಸಿಬಿಟ್ಟರು . ಒಂದೊಮ್ಮೆ ಇಸ್ರೋ ವಿಜ್ಞಾನಿಗಳು ಮಸಿದಿಗೊ, ಚರ್ಚಿಗೂ ಭೇಟಿಯಿತ್ತಿದ್ದರೆ ಇದೆ ಪ್ರಗತಿಪರ, ಜೀವಪರ ಚಿಂತಕರು ವಿಜ್ಞಾನಿಗಳನ್ನು ಹೊಗಳಿ ಅಟ್ಟಕ್ಕೆರಿಸುವುದರಲ್ಲಿ ಸಂಶಯವಿರಲಿಲ್ಲ. ಹಿಂದುವಿರೋಧಿಗಳಾದ ಈ ಬುದ್ದಿಜೀವಿಗಳು ಪ್ರಗತಿಪರರೆಂಬ ಮುಖವಾಡ ಧರಿಸಿ ಕೇವಲ ಹಿಂದೂ ಧರ್ಮದ ಆಚರಣೆಗಳನ್ನು ವಿರೋಧಿಸುತ್ತಿರುವುದು ಇದೆ ಮೊದಲಲ್ಲ. ಜ