Posts

Showing posts from 2022

ಶತಮಾನದ ಸಂತ - ನೆನೆದರೆ ಅವರ ಗುಣ ನಾಶವಾಗುವುವು ದುಃಖಗಳ ಗಣ

Image
 ಶತಮಾನದ ಸಂತ - ನೆನೆದರೆ ಅವರ ಗುಣ ನಾಶವಾಗುವುವು ದುಃಖಗಳ ಗಣ   -                                             ಡಾ.ಶ್ರೀನಿಧಿ ಆಚಾರ್ಯ ಪ್ಯಾಟಿ ಪೂಜ್ಯ ಗುರುಗಳಾದ ವಿಶ್ವೇಶತೀರ್ಥ ಶ್ರೀಪಾದಂಗಳವರ ಜೀವನವನ್ನು ಬರವಣಿಗೆಯಿಂದ ತಿಳಿಯಲು ಸಾಧ್ಯವಿಲ್ಲ . ಅದನ್ನು ಅನುಭವಿಸಿಯೇ ತಿಳಿಯಬೇಕು . ಆದರೆ ವಾಕ್ ಶುದ್ಧಿಗಾಗಿ , ಗುರುಗಳ  ಅನುಗ್ರಹಕ್ಕಾಗಿ  ಅವರ ಚರಿತ್ರೆಯನ್ನು ಬರೆಯುವುದು ಪೂರ್ವಾಚಾರ್ಯರು ತಿಳಿಸಿಕೊಟ್ಟ ಕ್ರಮ. ಆ ನಿಟ್ಟಿನಲ್ಲಿ ಅವರ ಶಿಷ್ಯರಾದ ಈಗ ಪೇಜಾವರಮಠದ ಪೀಠದಲ್ಲಿ ವಿರಾಜಮಾನರಾದ ಶ್ರೀವಿಶ್ವಪ್ರಸನ್ನತೀರ್ಥಶ್ರೀಪಾದರು ರಚಿಸಿದ  *ತಪಸ್ಸ್ವಾಧ್ಯಾಯಶುಶ್ರೂಷಾಕೃಷ್ಣಪೂಜಾರತಂ ಮುನಿಂ।* *ವಿಶ್ವೇಶಮಿಷ್ಟದಂ ವಂದೇ ಪರಿವ್ರಾಟ್ ಚಕ್ರವರ್ತಿನಂ।।* ಎಂಬ ದಿವ್ಯವಾದ ಚರಮಶ್ಲೋಕದ ಯಥಾಮತಿ ಅರ್ಥವಿವರಣೆಗಾಗಿ ಒಂದು ಉಪಕ್ರಮ ಜ್ಞಾನದ ಪ್ರಖರತೆ . ಸ್ವಾಮಿಗಳನ್ನು, ಶತಾವಧಾನಿಗಳೆನ್ನಬಹುದು . ನೂರು ತರಹದ ಚಿಂತನೆಗಳು ಯಾವ ಕಾಲದಲ್ಲೂ ಸ್ವಾಮಿಗಳ ಮನಸ್ಸಿನ್ನಲ್ಲಿ ನಡೆಯುತ್ತಿರುತ್ತಿತ್ತು.  ಸ್ವಾಮಿಗಳಿಗೆ ಪ್ರತಿದಿನ ಅನೇಕ ಕಾರ್ಯಕ್ರಮಗಳು . ಅದರ ಮಧ್ಯದಲ್ಲಿ ಪಲಿಮಾರು ಶ್ರೀಪಾದರು ವಿದ್ಯಾಮಾನ್ಯತೀರ್ಥರ ಆರಾಧನಾ ನಿಮಿತ್ತ ಆಯೋಜಿಸುತ್ತಿದ್ದ ಅತ್ಯಂತ ಕ...