Posts

Showing posts from April, 2020

ಅಳಿಯದ ಅಚ್ಚರಿತನ- ಪೂಜ್ಯ ಗುರುಗಳ ಗುಣ

Image
ಅಳಿಯದ ಅಚ್ಚರಿತನ- ಪೂಜ್ಯ ಗುರುಗಳ ಗುಣ                         ಪೂಜ್ಯ ಗುರುಗಳು ತಾವು ಜೀವನದುಕ್ಕೂ ಎಂದೂ ಬಿಡದ ಪಾಠ, ಪ್ರವಚನ, ಸಂಚಾರವನ್ನು ಮಾಡುತ್ತಲೆ ತಮ್ಮ ಇಹಲೋಕದ ಯಾತ್ರೆಯನ್ನು ಮುಗಿಸಿದರು.  ಅವರ ವ್ಯಕ್ತಿತ್ವ ಸಮುದ್ರವಿದ್ದಂತೆ.  ನಾವು ನಮ್ಮ ನಮ್ಮ ಪಾತ್ರೆಗನುಗುಣವಾಗಿ ನೀರನ್ನು ಮನೆಗೆ ತರಬಹುದು .  ತರದೆ ಇದ್ದದ್ದೆ ಅಪಾರ . ಆದರೆ ನಮಗೆ ಸಮುದ್ರದ ನೀರನ್ನು ತಂದೆವೆಲ್ಲಾ ಎನ್ನುವ ಖುಷಿ . ಪೂಜ್ಯ ಗುರುಗಳ ವ್ಯಕ್ತಿತ್ವವನ್ನು ಅರಿಯಲು ಪ್ರಯತ್ನಿಸಿದವರೆಲ್ಲಗೂ ಆದದ್ದು ಇದೇ ಅನುಭವ . ಇಂತಹ ಗುರುಗಳ ಜೊತೆ  ಎರಡು ವರ್ಷ ಸಂಚಾರ ಮಾಡುವ ಭಾಗ್ಯ ಒದಗಿದ್ದು ನನ್ನ ಸುಕೃತದ ಫಲ .ನಾನೂ ಪಾತ್ರೆಗನುಗುಣವಾಗಿ ಒಂದಷ್ಟು ಅನುಭವ ಪಡೆದಿದ್ದೇನೆ . ಅದನ್ನು ಇಲ್ಲಿ ದಾಖಲಿಸಲು ಪ್ರಯತ್ನಿಸುತ್ತೇನೆ   ಮಹಾನ್ ದೇಶಭಕ್ತರು . ಪೇಜಾವರ ಸ್ವಾಮಿಗಳು ದೇಶಭಕ್ತರು. ಹೌದು ಸ್ವಾಮಿಗಳು ಎಂದೂ ದೇಶಭಕ್ತಿಗೂ ಆಧ್ಯಾತ್ಮಕ್ಕೂ ವಿರೋಧವನ್ನು ಕಾಣಲೇ ಇಲ್ಲ.  ಈ ವಿಷಯದಲ್ಲಿ ನನಗಾದ ಅನುಭವವೇ ಪ್ರಮಾಣ.  May 16-2014 ಭಾರತದ ರಾಜಕೀಯದಲ್ಲಿ ಮಹತ್ವದ ದಿನ. ಅಂದು ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳುವುದಿತ್ತು. ಸ್ವಾಮಿಗಳೊಟ್ಟಿಗೆ ಕೆಲವು ದಿನಗಳಿಂದ ನಾವು ಉಡುಪಿಯಲ್ಲೇ ಇದ್ದೆವು. ಅಂದು ಬೆಳಗ್ಗೆ ಸ್ವಾಮಿಗಳು ಕೃಷ್ಣನ ಪೂಜೆ ಮುಗಿಸಿ ಬರುವಾಗ ರಥಬೀದಿಯಲ್ಲಿ "ಶೋಭಾ ಕರಂದ್ಲಾಜೆ" ಯವರು ಎದುರಾದರು. ಅವರನ್ನು ಆಶೀರ್ವದಿಸಿ ಮಠಕ್ಕೆ ಬಂ