Posts

Showing posts from April, 2019

ವ್ಯಾಸರಾಜರ ಜೀವನ – ಒಂದು ಐತಿಹಾಸಿಕ ಅಧ್ಯಯನ

Image
                            ವ್ಯಾಸರಾಜರ ಜೀವನ – ಒಂದು ಐತಿಹಾಸಿಕ ಅಧ್ಯಯನ                                                                                                 ಭಾರತದಲ್ಲಿ ಸನಾತನ ಧರ್ಮದ ಪುನರುತ್ಥಾನದ ವಿಷಯದಲ್ಲಿ ಮಾಧ್ವ ಯತಿಗಳ ಕೊಡುಗೆ ಎನೂ ಇಲ್ಲ ಎನ್ನುವ ಆಕ್ಷೇಪವನ್ನು ನಾವು ಆಗ್ಗಾಗ್ಗೆ ಕೇಳುತ್ತೆವೆ . ವಿದ್ಯಾರಣ್ಯರು ಹಕ್ಕ-ಬುಕ್ಕರಿಂದ ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿ ಸನಾತನ ಧರ್ಮದ ಪುನರುತ್ಥಾನಕ್ಕೆ ಶ್ರಮಿಸಿದ್ದನ್ನು ನಾವು ಓದಿದ್ದೇವೆ . ಆದರೆ ಅದರಂತೆಯೇ  ವ್ಯಾಸರಾಜರ ಜೀವನವನ್ನು ಐತಿಹಾಸಿಕ ದೃಷ್ಟಿಯಿಂದ ಇನ್ನೂ ಹೆಚ್ಚು ಅಧ್ಯಯನ ಮಾಡಿದರೆ ಇವರ ಕೊಡುಗೆಯೂ ಈ ವಿಷಯದಲ್ಲಿ ಅನುಪಮವೇ ಎನ್ನುವ ಸತ್ಯ ಗೋಚರಿಸುತ್ತದೆ.  ವ್ಯಾಸರಾಜರು  ಸಾಳುವ ನರಸಿಂಹದೇವರಾಯ , ತಿಮ್ಮಭೂಪಾಲ , ತುಳುವ ನರಸ ನಾಯಕ , ವೀರ ನರಸಿಂಹರಾಯ , ಕೃಷ್ಣದೇವರಾಯ , ಅಚ್ಯುತ ದೇವರಾಯರೆಂಬ ವಿಜಯನಗರರಾಜರುಗಳಿಗೆ ಅರ್ಧಶತಮಾನಕ್ಕೂ ಹೆಚ್ಚು ಕಾಲ ಮಾರ್ಗದರ್ಶನ ಮಾಡಿದ ರಾಜಗುರುಗಳಾಗಿದ್ದರು . ಪುರಂದರದಾಸರು , ಕನಕದಾಸರಿಗೆ ಆಧ್ಯಾತ್ಮ ಗುರುಗಳಾಗಿ ತಮ್ಮ ರಾಜ್ಯದಲ್ಲೆಲ್ಲಾ ಭಕ್ತಿ ಮಾರ್ಗವೂ ಪ್ರಬಲವಾಗಿ ಜನರ ಮನಸ್ಸಿನಲ್ಲಿ ಬೇರೂರುವಂತೆ ಮಾಡಿದರು. ರಾಜರೆಲ್ಲರೂ ತಮ್ಮ ಮಾತನ್ನು ಕೇಳುವ ಸ್ಥಿತಿಯಲ್ಲಿ ಇದ್ದರೂ ಯಾವುದೆ ವೈಯಕ್ತಿಕ ಲಾಭವನ್ನು ಮಾಡಿಕೊಳ್ಳದೆ, ಕೃಷ್ಣನ ಭಕ್ತಿಯಲ್ಲಿ ಲೀನರಾಗಿ ವೈರಾಗ್ಯದ ಪರಾಕಾಷ್ಠತೆಯನ್ನು ಪ್